ಶನಿವಾರ, ಜನವರಿ 30, 2010

ವೈಕುಂಠರಾಜು ಇನ್ನಿಲ್ಲ


ಹಿರಿಯ ಪತ್ರಕರ್ತ ಡಾ. ಬಿ. ವಿ ವೈಕುಂಠರಾಜು ಶನಿವಾರ ಸಂಜೆ ಇಲ್ಲವಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಲ್ಲಿಗೆ ಆಸ್ಟತ್ರೆಯಲ್ಲಿ ಸುಮ್ಮನಾದರು. ಪತ್ನಿ ಕಾತ್ಯಾಯಿನಿ, ಪುತ್ರರಾದ ಸನತ್ ಮತ್ತು ಶರತ್ ರಾಜು ಅವರ ದೇಹವನ್ನು ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.
ವೈಕುಂಠರಾಜುಗೆ ಹಲವು ಮುಖ. ಪತ್ರಕರ್ತ, ಕತೆಗಾರ, ನಾಟಕಕಾರ, ಸಿನಿಮಾ ಮತ್ತು ನಾಟಕ ವಿಮರ್ಶಕ, ಸೂಕ್ಷ್ಮ ರಾಜಕೀಯ ಒಳನೋಟಗಳುಳ್ಳ ಚಿಂತಕ. ಅವರ ಕಾದಂಬರಿಗಳು ಆಕ್ರಮಣ, ಉದ್ಭವ ಸಿನಿಮಾ ಕೂಡಾ ಆಗಿ ಪ್ರಸಿದ್ಧಿ ಪಡೆದಿವೆ. ಉದ್ಭವ ಕಾದಂಬರಿ, ಸಮಾಜದಲ್ಲಿ ಹಬ್ಬಿಕೊಂಡಿರುವ ರಾಜಕಾರಣವನ್ನು ಹಸಿರಾಗಿ ಚಿತ್ರಿಸುತ್ತೆ. ಅವರ ಕನ್ನಡ ರಂಗಭೂಮಿ ಕುರಿತ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯ ಡಿಲಿಟ್ ಪದವಿ ನೀಡಿದೆ.
ಅವರ ಇತರೆ ಕೃತಿಗಳು - ಅಂತ್ಯ, ಕಾನನ್ ದೇವಿ, ತಹತಹ (ಆತ್ಮಕತೆ), ಆಧುನಿಕ ನೀತಿ ಕತೆಗಳು, ಸಂಪದಾಕರ ಡೈರಿ ಸಂಪುಟಗಳು, ಸಿನಿಮಾತು, ವಾರ್ಡ್ ನಂ 206.