ಭಾನುವಾರ, ಅಕ್ಟೋಬರ್ 18, 2009

ಕುಂಬಾರ ವೀರಭದ್ರಪ್ಪನೂ, ಆಸ್ಕರ್ ಅವಾರ್ಡೂ...

ಅಂದು ಚಿತ್ರದುರ್ಗದ ಸಾಹಿತ್ಯ ಸಮ್ಮೇಳನ ಮುಗಿಸಿ ರಾತ್ರಿ ಅರುಣ್ ಹೊಸಪೇಟೆ ಬಸ್ ಗೆ ಕಾಯುತ್ತಿದ್ದ. ಅದೇ ಹೊತ್ತಿಗೆ ಬಯಲು ಸೀಮೆಯ ಗಟ್ಟಿ ಕತೆಗಾರ ಕುಂವೀ ಎದುರಾರದರು. ಕೆಲ ಸ್ನೇಹಿತರೊಂದಿಗೆ ಅವರು ಬಸ್ ಸ್ಟಾಂಡ್ ಗೆ ಕಾರಲ್ಲಿ ಬಂದು ಇಳಿದರು. ಆ ಹೊತ್ತಿಗಾಗಲೇ ನಮ್ಮ ಗಟ್ಟಿ ಕತೆಗಾರ ಪರಮಾತ್ಮನನ್ನು ಆವಾಹಿಸಿದ್ದ ಕಾರಣ ಸ್ವಲ್ಪ ಟೊಳ್ಳಾದಂತೆ ಕಾಣುತ್ತಿದ್ದರು.
ತನ್ನ ಊರಿನ ಹಿರಿಯಣ್ಣ ಸಿಕ್ಕಾಗ ಮಾತನಾಡಿಸದೆ ಇರಲು ಅರುಣನಿಗೆ ಸಾಧ್ಯವಾಗಲಿಲ್ಲ. ರೆಡಿಯಾಗಿದ್ದ ಬಸ್ ನ್ನೂ ಬಿಟ್ಟು ಕತೆಗಾರನನ್ನು ಮಾತನಾಡಿಸಲು ಮುಂದಾದ.
ಅರುಣನನ್ನು ನೋಡಿದವರೇ ಕುಂವೀ ಉಲ್ಲಸಿತರಾದರು. ನಾಲ್ಕುದಿನಗಳ ಕಾಲ ದುರ್ಗದ ಸಾಹಿತ್ಯ ಉತ್ಸವದಲ್ಲಿ ಮುಳುಗಿ ಎದ್ದಿದ್ದ ಅವರು ಇನ್ನು ಕತೆ, ಕವಿತೆ, ವಿಮರ್ಶೆ ಗುಂಗಿನಿಂದ ಹೊರಬಂದಂತೆ ಕಾಣಲಿಲ್ಲ. ಅರುಣನನ್ನು ತಮ್ಮ ಸ್ನೇಹಿತರಿಗೆ ಪರಿಚಯಿಸುತ್ತ... "ಇವ ನಮ್ಮ ಊರಿನ ಯುವ ಕವಿ. ತುಂಬಾ ಚೆನ್ನಾಗಿ ಬರೀತಾನೆ.." ಎಂದರು. ಅಷ್ಟಕ್ಕೇ ಸುಮ್ನಾಗಿದ್ದರೆ, ಅರುಣನಿಗೆ ಆಘಾತ ಆಗ್ತಿರಲಿಲ್ಲ. ಕುಂವೀ ಮುಂದುವರೆದು "ನಮ್ಮ ಅರುಣ, ಅಡಿಗರಿಗಿಂತ ದೊಡ್ಡ ಕವಿ..." ಅಂದು ಬಿಟ್ಟರು. ತಕ್ಕಳಪ್ಪ, ಅರುಣ ಒಂದು ಕ್ಷಣ ದಿಕ್ಕೇ ತೋಚದಂತಾದ. ಕುಂವೀ ಸ್ನೇಹಿತರು ಅರುಣನನ್ನು ಗಮನಿಸುತ್ತಿದ್ದ ಪರಿ ಇದ್ದಕ್ಕಿದ್ದಂತೆ ಬದಲಾಯಿತು. ಎಲ್ಲರೂ ಎರಡೆರಡು ಬಾರಿ ಕೈ ಕುಲುಕಿ ಪರಿಚಯ ಮಾಡಿಕೊಂಡರು.
ಕುಂವೀ ಹೀಗೆ ಬಿರುದು ಕೊಟ್ಟಿರುವುದು ಅರುಣನಿಗೆ ಮಾತ್ರವಲ್ಲ. ಕೊಟ್ಟೂರಿನ ಹಲ ಕವಿ, ಕಲಾವಿದ ಮಿತ್ರರು ಇವರ ಹೊಗಳಿಕೆಗಳಿಂದ ಹಿಗ್ಗಿದ್ದಾರೆ. ನಾವು ನಮ್ಮಲ್ಲಿ ಬಳಗದ ಮಿತ್ರ ನಿರಂಜನ ಮುಊಲತಃ ಶಿಕ್ಷಕ. ಅವನ ಅದೃಷ್ಟವೋ, ದುರಾದೃಷ್ಟವೋ ಕುಂವೀ ಮಗ ಶಾಲೆಯಲ್ಲಿ ಇವನ ವಿದ್ಯಾರ್ಥಿ. ನಿರಂಜನ ಕೊಟ್ಟೂರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ್ಲಿ ಉತ್ತಮ ಶಿಕ್ಷಕ ಎಂದೇ ಹೆಸರು ಗಳಿಸಿದ್ದಾನೆ. ಹೀಗೆ ಒಂದು ದಿನ, ಕುಂವೀ ತಮ್ಮ ಮಗನನ್ನು ನಿರಂಜನ್ ಸರ್ ಹೇಗೆ ಪಾಠ ಮಾಡ್ತಾರೋ ಅಂತ ಕೇಳಿದ್ದಾರೆ. ಮಗ, ಅವರು ತುಂಬಾ ಚೆನ್ನಾಗಿ ಪಾಠ ಮಾಡ್ತಾರೆ ಎಂದು ಬಿಟ್ಟಿದ್ದಾನೆ.
ಅಷ್ಟು ಸಾಕಿತ್ತು ಕುಂವೀ ಗೆ. ಮಾರನೇ ದಿನ ಕೊಟ್ಟೂರಿನ ಬಜಾರಿನಲ್ಲಿ ನಿರಂಜನ ಎದುರಾಗಿದ್ದಾನೆ. "ಓಯ್ ನೀನು ನಮ್ಮ ಕೊಟ್ಟೂರಿನ ಸರ್ವೆಪಲ್ಲಿ ರಾಧಾಕೃಷ್ಣ ಕಣಪ್ಪೋ.." ಎಂದು ಉದ್ಗರಿಸಿದ್ದಾರೆ. ನಿರಂಜನ ಅವರ ಮಾತನ್ನು ಅರಗಿಸಿಕೊಳ್ಳಲು ಸಿದ್ದು ದೇವರಮನಿ ಲುಬ್ರಿಕೆಂಟ್ಸ್ ಅಂಗಡಿಗೆ ಹೋಗಿ ಒಂದು ಕಪ್ ಚಹ ತರಿಸಿಕೊಂಡು ಕುಡಿಯಬೇಕಾಯ್ತು!
ಕುಂವೀ ಹೊಗಳಿಕೆಯ ಧಾಟಿಗೆ ಬೆಚ್ಚಿದವರು ಕಲಾವಿದ ಶ್ರೀಕಾಂತ್ (ಸೃಜನ್ ಎಂದೇ ಖ್ಯಾತಿ) ಕೂಡ. ಅವರು ತಮ್ಮ ಕೆಲ ಸ್ನೇಹಿತರ ಒಡಗೂಡಿ ಕುಂವೀ ಜೀವನ ಮತ್ತು ಸಾಧನೆ ಕುರಿತು ಒಂದು ಸಾಕ್ಷ್ಯಚಿತ್ರ ಚಿತ್ರೀಕರಿಸಿದರು. ಕುಂವೀ ಸಹಜವಾಗಿಯೇ ಖುಷಿಯಾದರು. ಸಾಕ್ಷ್ಯಚಿತ್ರ ದ ಫೈನಲ್ ಪ್ರಿಂಟ್ ತಯಾರಾಯಿತು. ಸ್ನೇಹಿತರೊಂದಿಗೆ ಕುಂವೀ ಕೂಡಾ ಅದನ್ನು ವೀಕ್ಷಿಸಿ "ಭಾರಿ ಚಲೋ ಮಾಡಿದಿರಪ್ಪಾ. ಈ ಸಾರ್ತಿ ರೆಹಮಾನ್ ಗೆ ಬಂದಂಗೆ ಮುಂದಿನ ಸರ್ತಿ ನಿಮಗೂ ಆಸ್ಕರ್ ಬರುತ್ತೆ ಗ್ಯಾರಂಟಿ.." ಅಂದರಂತೆ!

5 ಕಾಮೆಂಟ್‌ಗಳು:

ಶ್ರೀನಿವಾಸಗೌಡ ಹೇಳಿದರು...

ಸತೀಶ್, ಅಧಿಕೃತವಾಗಿ ಬ್ಲಾಗ್ ಲೋಕಕ್ಕೆ ಸ್ವಾಗತ. ಲೇಖನ ಚೆನ್ನಾಗಿದೆ.
ದಿನಾಲು ನೆಟ್ ನೋಡಕ್ಕೆ ಇನ್ನು ನಂಗೆ ಖುಷಿ ಆಗಬಹುದು.
ನಿಂಗೆ ಏನು ಬಿರುದು ಕೊಡೋದು ಅಂತ ಯೋಚನೆ ಮಾಡ್ತಾ ಇದ್ದೀನಿ.

ಹಳ್ಳಿಕನ್ನಡ ಹೇಳಿದರು...

ಅಧಿಕೃತವಾಗಿ ಅಂದರೆ ಏನು ಗೌಡ್ರೇ?

ಅನಾಮಧೇಯ ಹೇಳಿದರು...

Gowda,
thanks for comments.
i never miss your writings. i always look forward for your write-ups.
in the history of kannada literature it is only Ha Ma Nayak who got Central Sahitya Akademi award for his column writings.
i wish you will get the first Central Sahitya Akademi award for writings in the blog!!
good luck
satish

nirusha ಹೇಳಿದರು...

lo satisha ninge kaaluyeleyoke blog kooda sikta.anyway congrats welcome to blogloka

Bedre Manjunath ಹೇಳಿದರು...

Hi! Very nice! Kum.Vee. is known for his sarcastic humour also. Just enjoy man! Don't become serious or take him that much seriously. The idea of sending his film to Oscar is ridiculous! Nice writings!
Bedre Manjunath